Friday, March 21, 2025
spot_img
More

    Latest Posts

    swarajya :ಸ್ವರಾಜ್ಯ 1942; ಲಾಂಗುಗಳ ಭ್ರಾಂತಿ ಮಧ್ಯೆ ಒಂದು ಕ್ರಾಂತಿಗೀತೆಯಂತೆ

    ಸಂತೋಷದ ಸಂಗತಿ. ಕನ್ನಡ ಚಿತ್ರರಂಗ ಎಂದರೆ ಬರೀ ಲಾಂಗುಗಳ ಲೋಕ ಎನ್ನುವಂತಾಗಿರುವಂಥ ಸಂದರ್ಭದಲ್ಲಿ ಯಾರೋ ಒಬ್ಬರು ಕ್ರಾಂತಿಕಾರಿ ಸಿನಿಮಾ ಮಾಡಿದ್ದಾರಂತೆ.

    ಈ ಲಾಂಗುಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಕೋಗಿಲೆ ವಸಂತಗಾನ ಹಾಡುತ್ತವೆ. ಆದರೆ ಲಾಂಗುಗಳ ಝಳಪಿಸುವಿಕೆಯ ಸದ್ದಿನಡಿ ಅವುಗಳ ಕುಹೂ ಕುಹೂ ಅಡಗಿಯೇ ಹೋಗುತ್ತದೆ. ಹಾಗೆಯೇ ಆಗಿದೆ ಪರಿಸ್ಥಿತಿ.

    ವರುಣ್‌ ಗಂಗಾಧರ್‌ ಈ ಸ್ವರಾಜ್ಯ 1942 ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅವರ ಪ್ರಕಾರ ಪಠ್ಯದಲ್ಲಿರುವ ಹುತಾತ್ಮ ಬಾಲಕನೊಬ್ಬನ ಕಥೆಯಂತೆ.

    MAMI: ಮಾಮಿ ವೇದಿಕೆ ಸಜ್ಜು; ಅಕ್ಟೋಬರ್‌ 19-24 ದಕ್ಷಿಣ ಏಷ್ಯಾದ ಪ್ರಮುಖ ಸಿನಿಮೋತ್ಸವ

    ವರುಣ್‌ ಗಂಗಾಧರ್‌ ಈ ಹಿಂದೆ ಹತ್ಯೆ ಸಿನಿಮಾ ಮಾಡಿದ್ದರು. ಹುಬ್ಬಳ್ಳಿಯ ಹುಡುಗನೊಬ್ಬ ಕ್ವಿಟ್‌ ಇಂಡಿಯಾ ಚಳವಳಿಯ ಭಾಗವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನ ಕಥೆಯಂತೆ ಈ ಸಿನಿಮಾ. ಬಾಲಕನೊಬ್ಬ ಸ್ವಾತಂತ್ರ್ಯದ ಕಿಚ್ಚನ್ನು ಹಿಡಿದು ಸಾಗಿದ ಧೀರೋದಾತ್ತನೊಬ್ಬನ ಕಥೆಯಂತೆ. ಶಾಲಾ ಮಕ್ಕಳಿಗೂ ಈ ಚಿತ್ರವನ್ನು ತೋರಿಸಬೇಕೆಂಬ ಆಸೆ ಅವರದ್ದು.

    ಚಳವಳಿಯಲ್ಲಿ ಆತ ಭಾಗವಹಿಸಿದಾಗ ಬ್ರಿಟಿಷರ ಗುಂಡೇಟಿಗೆ ಬಲಿಯಾಗುತ್ತಾನೆ. ಚರಿತ್ರೆಯ ಅಧ್ಯಾಯವಿದು. ಒಂದಿಷ್ಟು ಶೋಧ ನಡೆಸಿ, ಅವರ ಕುಟುಂಬಸ್ಥರನ್ನು ಹುಡುಕಿ ಮಾಹಿತಿ ಪಡೆದು, ಒಪ್ಪಿಗೆ ಪಡೆದು ಚಿತ್ರ ಮಾಡಿದ್ದಾರಂತೆ ನಿರ್ದೇಶಕರು. ವಿಶೇಷವೆಂದರೆ ಈ ಬಾಲಕನ ಪಾತ್ರದಲ್ಲಿ ವರುಣ್‌ ಗಂಗಾಧರ್‌ ಅವರ ಮಗ ಅಭಿನಯಿಸಿದ್ದಾನೆ. ಇತ್ತೀಚೆಗೆ ಇದರ ಟೀಸರ್‌ ಸಹ ಬಿಡುಗಡೆಯಾಯಿತು.

    IFFI55: ಇಫಿ ಚಿತ್ರೋತ್ಸವಕ್ಕೆ ಸಜ್ಜಾಗಿ; ಪ್ರತಿನಿಧಿಯಾಗಿ ನೋಂದಾಯಿಸಿ

    ತಾರಾಗಣದಲ್ಲಿ ವರುಣ್‌ ಜಿ, ಯಶ್‌ ರಾಜ್‌ ಕಾರಜೋಳ್, ಓಂ ಕಾರಜೋಳ್, ಆದ್ಯ ಕಾರಜೋಳ್, ವೀಣಾ ಸುಂದರ್‌, ನಾಗೇಶ್‌ ಮಯ್ಯ,‌ ಮೂಗು ಸುರೇಶ್‌, ಸಚಿನ್‌ ಪುರೋಹಿತ್‌, ಜಾನಿ ಮತ್ತಿತರಿದ್ದಾರೆ. ಸಂಗೀತ ನಿರ್ದೇಶನ ಅಲೆನ್‌ ಕ್ರಾಸ್ಟಾರದ್ದು, ಛಾಯಾಗ್ರಹಣ ಸೂರ್ಯಕಾಂತ್‌ ರದ್ದು.

    ಈ ಸಿನಿಮಾ ರೂಪುಗೊಳ್ಳುತ್ತಿರುವುದು ವಿವೈ ಸಿನಿಮಾಸ್‌. ನಿರ್ಮಾಪಕರು ಡಾ. ಪುಷ್ಪಾವತಿ ಹಾಗೂ ಎ ಕಾರಜೋಳ ಶಕುಂತಲಾ ಅವರು.

    Shankar Nag:ಇಂಥ ಇನ್ನೊಬ್ಬ ಹೀರೊ ಈಗ ಯಾರಾದರೂ ಸಿಕ್ಕರೆ ಹುಡುಕಿಕೊಡಿ !

    ಈಗಾಗಲೇ ಚಿತ್ರೀಕರಣ ಮುಗಿಸಿ ಸಂಸ್ಕರಣ ಕೆಲಸ ನಡೆಯುತ್ತಿದೆ. ಶೀಘ್ರವೇ ತೆರೆಯ ಮೇಲೆ ಬರಲಿದೆಯಂತೆ. ಆಗಸ್ಟ್‌ ಮುಗಿಯಿತು, ಅಕ್ಟೋಬರ್‌ ಸಹ ಮುಗಿಯಿತು. ಇನ್ನೇನಿದ್ದರೂ ಜನವರಿ-ಗಣರಾಜ್ಯೋತ್ಸವ. ಹೀಗಾದ್ರೂ ಒಂದು ಚಿತ್ರ ಬಿಡುಗಡೆಗೆ ಸಂದರ್ಭ ಬೇಕಿಲ್ಲ.

    ಸಿನಿಮಾ ಚೆನ್ನಾಗಿದ್ದರೆ ಯಾವಾಗ ಬಿಡುಗಡೆಯಾದರೂ ಗೆಲ್ಲುತ್ತದೆ. ಲಾಂಗುಗಳ ಭ್ರಾಂತಿ ಮಧ್ಯೆ ಕ್ರಾಂತಿ ಗೀತೆ ಕೇಳಿಸುವುದೋ ಕಾದು ನೋಡೋಣ.

    Latest Posts

    spot_imgspot_img

    Don't Miss